ಪ್ರಜಾಸ್ತ್ರ ಕ್ರೀಡಾ ಸುದ್ದಿ
ಏಷ್ಯಾ ಕಪ್ ಟೂರ್ನಿಯ ಸೂಪರ್ ಫೋರ್ ನಲ್ಲಿ ಭಾರತ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡ ಪಾಕಿಸ್ಥಾನ ಹಾಗೂ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸುವ ಮೂಲಕ, ಬಹುತೇಕ ಫೈನಲ್ ಬಾಗಿಲು ಮುಚ್ಚಿದೆ.
ಇದೀಗ ಸೋಷಿಯಲ್ ಮೀಡಿಯಾದ ತುಂಬಾ ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ನಾಯಕ ಎಂ.ಎಸ್ ಧೋನಿಯ ಬಗ್ಗೆಯೇ ಚರ್ಚೆ ನಡೆದಿದೆ. ಅಂದರೆ, ಧೋನಿ ನಾಯಕತ್ವ, ಅವರ ಸ್ಟ್ಯಾಟರ್ಜಿ, ಕೀಪಿಂಗ್ ಸೇರಿದಂತೆ ಹಲವು ವಿಷಯಗಳ ಚರ್ಚೆ ನಡೆದಿದೆ. ತಂಡವನ್ನು ಹೇಗೆ ಗೆಲುವಿನ ದಡ ಸೇರಿಸುತ್ತಿದ್ದರು ಅನ್ನೋದರ ಕುರಿತು ವಿಡಿಯೋಗಳು ಹರಿದಾಡುತ್ತಿವೆ.
ಫಾರ್ಮ್ ನಲ್ಲಿ ಇಲ್ಲದವರನ್ನು ತಂಡದಲ್ಲಿ ಆಯ್ಕೆ ಮಾಡಿಕೊಂಡ ಪರಿಣಾಮ ಭಾರತ ತಂಡಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ಟೀಕಿಸಲಾಗುತ್ತಿದೆ. ಇಂದು ನಡೆಯುವ ಪಾಕ್-ಅಫ್ಘನ್ ಪಂದ್ಯದಲ್ಲಿ ಪಾಕ್ ಸೋಲಬೇಕು. ನಾಳೆ ನಡೆಯುವ ಭಾರತ-ಅಫ್ಘನ್ ಪಂದ್ಯದಲ್ಲಿ ಭಾರತ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ನಾಡಿದ್ದು ನಡೆಯುವ ಪಾಕ್-ಶ್ರೀಲಂಕಾ ಪಂದ್ಯದಲ್ಲಿ ಪಾಕ್ ಸೋಲಬೇಕು. ಅಂದಾಗ ಭಾರತ ಫೈನಲ್ ಗೆ ಬರಲಿದೆ. ಆದರೆ, ಇದು ಸಾಧ್ಯವಾಗುವುದು ತುಂಬಾ ಕಡಿಮೆ. ಹೀಗಾಗಿ ಈ ಬಾರಿ ಏಷ್ಯಾ ಕಪ್ ಕಿರೀಟ ಭಾರತದ ಪಾಲಿಗಿಲ್ಲ ಎನ್ನಲಾಗುತ್ತಿದೆ.