ಪ್ರಜಾಸ್ತ್ರ ಕ್ರೀಡಾ ಸುದ್ದಿ
ಚೆನ್ನೈ: ಕ್ರಿಕೆಟ್ ಪ್ರೇಮಿಗಳ ಹಬ್ಬವಾದ ಐಪಿಎಲ್ ಮಾರ್ಚ್ 22ರಂದು ಪ್ರಾರಂಭವಾಗುತ್ತಿದೆ. ಆರ್ ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ನಡೆಯುತ್ತಿದೆ. ಹೀಗಿರುವ ಹೊತ್ತಿನಲ್ಲಿಯೇ ಸಿಎಸ್ಕೆ ತಂಡದ ನಾಯಕತ್ವವನ್ನು ಮಹೇಂದ್ರ ಸಿಂಗ್ ಧೋನಿ ತೊರೆದಿದ್ದಾರೆ. ಯುವ ಆಟಗಾರ ಋತುರಾಜ್ ಗಾಯಕವಾಡ್ ನೂತನ ನಾಯಕರಾಗಿದ್ದಾರೆ.
ಪಂದ್ಯ ಆರಂಭಕ್ಕೂ ಒಂದು ದಿನ ಮೊದಲು ಧೋನಿ ನಾಯಕತ್ವದಿಂದ ಕೆಳಗೆ ಇಳಿದಿದ್ದಾರೆ. ಸಿಎಸ್ಕೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. 42 ವರ್ಷದ ಧೋನಿಗೆ ಇದು ಕೊನೆಯ ಐಪಿಎಲ್ ಅಂತಾನೂ ಹೇಳಲಾಗುತ್ತಿದೆ. ಇವರ ನಾಯಕತ್ವದಲ್ಲಿ ಐದು ಬಾರಿ ಐಪಿಎಲ್ ಟ್ರೂಫಿ ಎತ್ತಿ ಹಿಡಿದಿದ್ದಾರೆ. 2020ರಿಂದ ಚೆನ್ನೈ ಪರ ಆಡಲು ಶುರು ಮಾಡಿರುವ ಋತುರಾಜ್ ಗಾಯಕವಾಡ 52 ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಬಾರಿಸಿದ್ದು, 590 ರನ್ ಗಳಿಸಿದ್ದಾರೆ.