ಪ್ರಜಾಸ್ತ್ರ ಸುದ್ದಿ
ಸಿಂದಗಿ: ವಿಜಯಪುರ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆಡಿಪಿ ಸಮಿತಿಗೆ ಸದಸ್ಯರಾಗಿ ಕಾಂಗ್ರೆಸ್ ಮುಖಂಡ, ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಶಿವಣ್ಣ ಕೋಟರಗಸ್ತಿ ಅವರನ್ನು ನೇಮಕ ಮಾಡಲಾಗಿದೆ.
ಗೋಲಗೇರಿ ಗ್ರಾಮದ ತಳವಾರ ಸಮಾಜದ ಮುಖಂಡರಾದ ಕಲ್ಯಾಣಿ ಯಂಕಂಚಿ, ಮಡಿವಾಳ ನಾಯ್ಕೋಡಿ, ಶಿವ ಶಂಕರ, ಸಂಜೀವಕುಮಾರ ಯಂಕಂಚಿ ಸೇರಿದಂತೆ ಇತರರು ಶಿವಣ್ಣ ಕೋಟರಗಸ್ತಿಯವರನ್ನು ಗುರುವಾರ ಸನ್ಮಾನಿಸಿದರು.