ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಖಾಸಗಿ ಟಿವಿ ಚಾನೆಲ್ ಗಳಿಗೆ ಸ್ಪಷ್ಟವಾದ ಸಂದೇಶ ನೀಡಿದೆ. ಯಾವುದೇ ವ್ಯಕ್ತಿ ಅಥವ ಗುಂಪುಗಳಿಗೆ ಸಂಬಂಧಿಸಿದಂತೆ ಸುಖಾಸುಮ್ಮನೆ ಅಪಪ್ರಚಾರ ಮಾಡುವಂತಿಲ್ಲವೆಂದು ಹೇಳಿದೆ.
ಬಾಲಿವುಡ್ ನಟ ಸುಶಾಂತ ಸಿಂಗ್ ರಾಜಪೂತ್ ಸಾವು ಹಾಗೂ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಕುಲ್ ಪ್ರೀತಿ ಸಿಂಗ್, ತನ್ನ ವಿರುದ್ಧ ಮಾನಹಾನಿ ಮಾಡಲಾಗ್ತಿದೆ ಎಂದು ದೆಹಲಿ ಹೈಕೋರ್ಟ್ ಗೆ ಹೋಗಿದ್ರು. ಹೀಗಾಗಿ ಈ ಸಲಹೆ ನೀಡಲಾಗಿದೆ.
ಕಾರ್ಯಕ್ರಮ ಸಂಹಿತೆಯಲ್ಲಿನ ಅಂಶಗಳನ್ನ ಗಮನದಲ್ಲಿಟ್ಟುಕೊಳ್ಳಬೇಕಿದೆ. ಅರ್ಧ ಸತ್ಯ ಅಥವ ಸುಳ್ಳಿನಿಂದ ಕೂಡಿರುವ ವಿಚಾರಗಳನ್ನ ಇಟ್ಟುಕೊಂಡು ಯಾರ ವಿರುದ್ಧವೂ ಮಾನಹಾನಿ, ದುರುದ್ದೇಶಪೂರಿತ ಕಾರ್ಯಕ್ರಮ ಮಾಡಬಾರದು ಎಂದು ತಿಳಿಸಿದೆ.