ಪ್ರಜಾಸ್ತ್ರ ಸುದ್ದಿ
ಶ್ರೀರಂಗಪಟ್ಟಣ: ಒಟ್ಟಿಗೆ ಹುಟ್ಟಿ ಒಟ್ಟಿಗೆ ಬೆಳೆದು ಒಟ್ಟಿಗೆ ಆಟ ಪಾಠದಲ್ಲಿದ್ದ ಅವಳಿ ಸಹೋದರಿಯರು ಒಟ್ಟಿಗೆ ಸಾವಿನ ಕದ ತಟ್ಟಿದ್ದಾರೆ. ಈ ಮನಮಿಡಿಯುವ ದುರಂತ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಇದೀಗ ಈ ಘಟನೆ ಬೆಳಕಿಗೆ ಬಂದಿದೆ.
ಸುರೇಶ ಹಾಗೂ ಯಶೋಧ ದಂಪತಿಯ ಅವಳಿ ಪುತ್ರಿಯರಾದ ದೀಪಿಕಾ ಹಾಗೂ ದಿವ್ಯ ಅನ್ನೋ 19 ವರ್ಷದ ಸಹೋದರಿಯರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮದುವೆ ಅನ್ನೋ ಹೆತ್ತವರ ನಿರ್ಧಾರ ಎಂದು ಹೇಳಲಾಗ್ತಿದೆ.
ಅವಳಿ ಸಹೋದರಿಯರು ತುಂಬಾ ಪ್ರೀತಿಯಿಂದ ಬೆಳೆದಿದ್ದಾರೆ. ಇಬ್ಬರ ನಡುವಿನ ಬಾಂಧವ್ಯ ತುಂಬಾ ಗಾಢವಾಗಿದೆ. ಹೆತ್ತವರು ಇಬ್ಬರನ್ನ ಮದುವೆ ಮಾಡಿಕೊಡಲು ನಿರ್ಧರಿಸಿದ್ದರಂತೆ. ಇದ್ರಿಂದಾಗಿ ತಾವಿಬ್ಬರು ಬೇರೆ ಬೇರೆ ಮನೆಗೆ ಹೋಗುವುದನ್ನ ಊಹಿಸಿಕೊಳ್ಳಲು ಆಗದ ಸಹೋದರಿಯರು ಇಂತಹ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಅರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.