ಪ್ರಜಾಸ್ತ್ರ ಸುದ್ದಿ
ತುಮಕೂರು: ಬೆಟ್ಟದ ಮೇಲೊಂದು ಮಹಿಳೆಯ ಶವ ಪತ್ತೆಯಾಗಿದೆ. ಜಕ್ಕೇನಹಳ್ಳಿಯ ಎಂ ಗೊಲ್ಲಹಳ್ಳಿ ಗ್ರಾಮದ ಹೊರವಲಯದ ಬೆಟ್ಟದಲ್ಲಿರುವ ಆಂಜನೇಯ ದೇವಸ್ಥಾನದ ಹತ್ತಿರ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಇದು ನಿಧಿ ಆಸೆಗಾಗಿ ನಡೆದ ಹತ್ಯೆಯೋ ಅಥವ ಇನ್ಯಾವುದೋ ವಿಚಾರಕ್ಕೆ ನಡೆದ ಹತ್ಯೆಯೋ ಅನ್ನೋದು ತಿಳಿಯಬೇಕಿದೆ.
ಬೆಟ್ಟದ ಮೇಲೆ ಕುರಿ ಕಾಯಲು ಹೋದಾಗ ಕೆಟ್ಟ ವಾಸನೆ ಬಂದಿದೆ. ಅದರ ಜಾಡು ಹಿಡಿದು ಹೋದಾಗ ಮಹಿಳೆಯ ಶವ ಪತ್ತೆಯಾಗಿದೆ. ಆಂಜನೇಯ ದೇವಸ್ಥಾನದ ಮುಂದೆ ಅಗೆಯಲಾಗಿದೆ. ಶವ ಪತ್ತೆಯಾಗಿದೆ. ಹೀಗಾಗಿ ಇದೇನಾದ್ರೂ ನಿಧಿ ಆಸೆಗಾಗಿ ನಡೆದ ಕೊಲೆನಾ ಅಥವ ಬೇರೆ ಕಾರಣಕ್ಕೆ ನಡೆದಿದ್ದಾ ಅನ್ನೋದರ ತನಿಖೆಯಾಗಬೇಕಿದೆ.