ಕೆಲ ದಿನಗಳಲ್ಲೇ ಮದ್ವೆಯಾಗಬೇಕಿದ್ದವನು ಈ ಕಾರಣಕ್ಕೆ ಆತ್ಮಹತ್ಯೆ

100

ಪ್ರಜಾಸ್ತ್ರ ಸುದ್ದಿ

ತುಮಕೂರು: ಕೆಲ ದಿನಗಳಲ್ಲೇ ಮದುವೆಯಾಗಬೇಕಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕ್ಯಾತಸಂದ್ರದಲ್ಲಿ ನಡೆದಿದೆ. ಕಮಲೇಶ್(36) ಮೃತ ದುರ್ದೈವಿ.

ಬೆಂಗಳೂರು ಮೂಲದ ಯುವತಿಯೊಂದಿಗೆ ಕಮಲೇಶ್ ಮದುವೆ ನಿಶ್ಚಿಯವಾಗಿತ್ತು. ಇನ್ನು ಕೆಲವು ದಿನಗಳಲ್ಲಿ ಮದುವೆಯಾಗಬೇಕಿತ್ತು. ಆದರೆ, ಅದ್ಹೇಗೋ ನಿಶ್ಚಿತಾರ್ಥದ ಉಂಗುರ ಕಳೆದುಕೊಂಡಿದ್ದಾನೆ. ಇದನ್ನು ಮನೆಯವರಿಗೆ ಹೇಳಲು ಭಯಪಟ್ಟು ಕಳೆದ 17ರಂದು ವಿಷ ಸೇವಿಸಿದ್ದಾನೆ.

ವಿಷಯ ತಿಳಿದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟು ದಿನಗಳ ಕಾಲ ಕಮಲೇಶಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಕೊನೆಗೂ ಮೃತಪಟ್ಟಿದ್ದಾನೆ. ಸಣ್ಣ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡು ಪ್ರಾಣವನ್ನೇ ಕಳೆದುಕೊಂಡಿದ್ದಾನೆ.




Leave a Reply

Your email address will not be published. Required fields are marked *

error: Content is protected !!