ಪ್ರಜಾಸ್ತ್ರ ಸುದ್ದಿ
ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಬಂಡೇಮಠದ ಬಸವಲಿಂಗ ಸ್ವಾಮೀಜಿಯ ನಿಗೂಢ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಸ್ವಾಮೀಜಿ ಬರೆದಿರುವ ಡೆತ್ ನೋಟಿನಲ್ಲಿ ನನ್ನ ತೇಜೋವಧೆಗೆ ಕೆಲವರು ಯತ್ನಿಸುತ್ತಿದ್ದಾರೆ. ಇದರಿಂದ ಮನಸ್ಸಿಗೆ ತೀವ್ರ ನೋವಾಗಿದ್ದು, ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಬರೆದಿದ್ದಾರಂತೆ.
ಈಗ ಸ್ವಾಮೀಜಿ ಸಾವಿಗೆ ಸಿಡಿ ಕಾರಣವೆಂದು ಹೇಳಲಾಗುತ್ತಿದೆ. ಸ್ವಾಮೀಜಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಮಹಿಳೆಯೊಬ್ಬರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರಂತೆ. ಸಿದ್ಧಗಂಗಾ ಮಠದ ಶಾಖಾ ಮಠವಾಗಿರುವ ಬಂಡೇಮಠದ ಸ್ವಾಮೀಜಿಯವರ ಬಗ್ಗೆ ಸಿದ್ಧಗಂಗಾ ಶ್ರೀಗಳಿಗೆ ತಿಳಿಸುವ ಬೆದರಿಕೆ ಹಾಕಿದ್ದರಂತೆ.
ಹೀಗೆ ಹಲವು ಅನುಮಾನಗಳು, ಶಂಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ವಾಮೀಜಿಯ ಸಾವಿನ ಹಿಂದಿನ ಸತ್ಯಾಸತ್ಯೆತೆಯ ತನಿಖೆ ನಡೆಸಿದ್ದಾರೆ.