ಸಾವಿನ ಗುಂಡಿ!

622

ಶಹಾಪುರ: ಈಜಾಡಲು ಹೋಗಿ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಅಬ್ದುಲ್ ಬಾಷಾ ದರ್ಗಾದ ಸಮೀಪದಲ್ಲಿ ಈ ಘಟನೆ ನಡೆದಿದೆ. 10 ವರ್ಷದ ಸಂತೋಷ ಸೂರ್ಯಕಾಂತ ಹಾಗೂ 9 ವರ್ಷದ ಪ್ರಜ್ವಲ್ ರಮೇಶ ಮೃತ ದುರ್ದೈವಿಗಳಾಗಿದ್ದಾರೆ.

ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಈ ಇಬ್ಬರು ಮಕ್ಕಳು ಕುಟುಂಬದೊಂದಿಗೆ ಅಬ್ದುಲ್ ಬಾಷಾ ದರ್ಗಾ ಪೂಜೆಗೆ ಬಂದಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಗುಂಡಿಯಲ್ಲಿ ಈಜಾಡಲು ಹೋಗಿ ಮೃತಪಟ್ಟಿದ್ದಾರೆ ಅಂತಾ ತಿಳಿದು ಬಂದಿದೆ.

ಗುರುತು ಪಡಿಸಿದ ಜಾಗದಲ್ಲಿ ತ್ಯಾಜ್ಯ ಹಾಕಲು ಈ ಗುಂಡಿಯನ್ನ ಕೆಲ ದಿನಗಳ ಹಿಂದೆ ಪರಿಸರ ಇಲಾಖೆ ಅಧಿಕಾರಿಗಳು ತೆಗೆಸಿದ್ರಂತೆ. ಆದ್ರೆ, ಇದರಲ್ಲಿ ನೀರು ಸಂಗ್ರಹವಾಗಿದ್ರಿಂದ ಮಕ್ಕಳಿಬ್ಬರು ಈಜಲು ಹೋದಾಗ ಈ ಅನಾಹುತ ಸಂಭವಿಸಿದ್ದು, ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


TAG


Leave a Reply

Your email address will not be published. Required fields are marked *

error: Content is protected !!