ಪ್ರಜಾಸ್ತ್ರ ಅಪರಾಧ ಸುದ್ದಿ
ಚಿಕ್ಕಮಗಳೂರು: ಕಳ್ಳರಿಬ್ಬರು ಹೆಲ್ಮೆಟ್ ಧರಿಸಿಕೊಂಡು ಹಾಡುಹಗಲೇ ಮನೆಯೊಂದಕ್ಕೆ ನುಗ್ಗಿ, ಚಾಕು ತೋರಿಸಿ ಮಹಿಳೆಯನ್ನ ಕಟ್ಟಿ ಹಾಕಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಗೆ ಬಂದ ಮಗ ತಾಯಿಯನ್ನು ಕೂಗಿದ್ದಾನೆ. ತಾಯಿಯ ಧ್ವನಿ ಕೇಳದೆ ಹೋದಾಗ ಕಿಟಕಿಯಿಂದ ನೋಡಿದಾಗ ಅವರನ್ನ ಕಟ್ಟಿ ಹಾಕಿರುವುದು ತಿಳಿದಿದೆ.
ಮನೆ ಹೊರಗಿನಿಂದ ಮಗ ಕೂಗಾಡಿದ್ದಾನೆ. ಇದ್ರಿಂದ ಮನೆಯಿಂದ ಹೊರ ಬಂದ ಕಳ್ಳರು ಚಾಕು ತೋರಿಸಿ ಎಸ್ಕೇಪ್ ಯತ್ನಿಸಿದ್ದಾರೆ. ಸಾರ್ವಜನಿಕರು ಕೂಗಾಡಿದ್ರಿಂದ ಅದೇ ರಸ್ತೆಯಲ್ಲಿ ಬರ್ತಿದ್ದ ಅಗ್ನಿಶಾಮಕ ವಾಹನ ಅವರ ಬೈಕ್ ಗೆ ಡಿಕ್ಕಿ ಹೊಡೆಸಿದ್ದಾರೆ. ಗಾಡಿಯಿಂದ ಬಿದ್ದವರು ಎಸ್ಕೇಪ್ ಆಗಿದ್ದಾರೆ.
ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರ ಮನೆಗೆ ಕಳ್ಳರಿಬ್ಬರು ಪಲ್ಸರ್ ಬೈಕ್ ನಲ್ಲಿ ಬಂದು ದರೋಡೆಗೆ ಯತ್ನಿಸಿದ್ದಾರೆ. ತಕ್ಷಣ ಕಾರ್ಯಪ್ರವರ್ತರಾದ ಪೊಲೀಸರು ಸಚಿನ ಹಾಗೂ ಮೋಹನ ಅನ್ನೋ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.