ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬರೀ ಕಮಿಷನ್ ಮೇಲೆ ಕೆಲಸ ಮಾಡುತ್ತಿದೆ ಅನ್ನೋ ಗಂಭೀರ ಆರೋಪವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಹಲವು ಕಮಗಾರಿಗಳು ಕಳಪೆಯಾಗಿದ್ದು, ಉದ್ಘಾಟನೆಯಾದ ಕೆಲ ದಿನಗಳು, ತಿಂಗಳಲ್ಲಿ ಕುಸಿದು ಬಿದ್ದ ಉದಾಹರಣೆಗಳಿವೆ. ಈಗ ಸಿಲಿಕಾನ್ ಸಿಟಿಯಲ್ಲಿ ಉದ್ಘಾಟನೆಯಾದ 3 ತಿಂಗಳಲ್ಲೇ ಅಂಡರ್ ಪಾಸ್ ಕುಸಿದಿದೆ.
ಕುಂದಲಹಳ್ಳಿ ಹತ್ತಿರದ ಅಂಡರ್ ಪಾಸ್ ಕುಸಿದಿದೆ. ಇದರಿಂದಾಗಿ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿದೆ. ಸಾರ್ವಜನಿಕರು 40 ಪರ್ಸೆಂಟರ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.