ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೇಂದ್ರ ಸರ್ಕಾರ ಅನ್ ಲಾಕ್ 3.0 ನಿನ್ನೆ ಘೋಷಿಸಿದೆ. ಅದರಂತೆ ಕೆಲ ಮಾರ್ಗದರ್ಶನ ನೀಡಿದೆ. ಇಂದು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಅದರಂತೆ ಇನ್ಮುಂದೆ ಭಾನುವಾರ ಬಂದ್ ಇರುವುದಿಲ್ಲವೆಂದು ಹೇಳಿದೆ. ಇದರ ಜೊತೆಗೆ ಶನಿವಾರದ ಸರ್ಕಾರಿ ರಜೆ ಕ್ಯಾನ್ಸಲ್ ಮಾಡಲಾಗಿದೆ.
ನೈಟ್ ಕರ್ಫ್ಯೂ ತೆರವುಗೊಳಿಸಲಾಗಿದೆ. ಭಾನುವಾರ ಲಾಕ್ ಡೌನ್ ರದ್ದುಗೊಳಿಸಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಅನುಮತಿ ನೀಡಲಾಗಿದೆ. ಆದ್ರೆ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಉಳಿದಂತೆ ಈಜುಕೋಳ, ಕ್ರೀಡೆ, ಮನರಂಜನೆಗೆ ಅವಕಾಶವಿಲ್ಲ. ಆಗಸ್ಟ್ 31ರ ತನಕ ಶಾಲಾ, ಕಾಲೇಜುಗಳಿಲ್ಲ.