ಪ್ರಜಾಸ್ತ್ರ ಸುದ್ದಿ
ವಿಜಯಪುರ: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು, ಇಂದು ಬೆಳಗ್ಗೆ ನಗರವನ್ನ ಸುತ್ತಾಡಿದ್ದಾರೆ. ಐತಿಹಾಸಿಕ ಗುಮ್ಮಟನಗರಿಯನ್ನ ಒಂದು ರೌಂಡ್ ಹಾಕಿದ ಸಚಿವರು, ಮೂಲಭೂತ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ನಗರದ ಅಂತಾರಾಷ್ಟ್ರೀಯ ಈಜುಕೊಳ, ನೆಹರು ಮಾರುಕಟ್ಟೆ, ಸ್ಯಾಟ್ ಲೈಟ್ ಬಸ್ ನಿಲ್ದಾಣ, ಆಶ್ರಯ ಬಡಾವಣೆ, ಗಾಂಧಿ ಸರ್ಕಲ್, ಅಮೃತ ಉದ್ಯಾನ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ವಿವಿಧ ಕೆಲಸ ಕಾಮಗಾರಿಗಳನ್ನ ವೀಕ್ಷಣೆ ಮಾಡಿದ್ರು.
ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿ ಅನೇಕರು ಹಾಜರಿದ್ರು.