ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರ ಜೋರಾಗಿದೆ. ಸುಡುಬಿಸಿಲಿನ ನಡುವೆಯೂ ಅಭ್ಯರ್ಥಿಗಳ ಮತಯಾಚನೆ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಪರ ಮೊಮ್ಮಗ ಒಂಟೆ ಮೇಲೆ ಕುಳಿತುಕೊಂಡು ಪ್ರಚಾರ ನಡೆಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಪರ ಮೊಮ್ಮಗ ಸಮರ್ಥ, ಒಂಟೆ ಮೇಲೆ ಕುಳಿತು ಕರಪತ್ರಗಳನ್ನು ಹಂಚುತ್ತಾ ಮತಯಾಚನೆ ನಡೆಸಿದ್ದಾರೆ. ಆದರೆ, ಚುನಾವಣೆಯಲ್ಲಿ ಈ ರೀತಿಯಾಗಿ ಪ್ರಾಣಿಗಳನ್ನು ಬಳಸುವುದಕ್ಕೆ ಅವಕಾಶ ಇದೆಯಾ ಇಲ್ಲವಾ ಅನ್ನೋ ಪ್ರಶ್ನೆ ಮೂಡಿದೆ.