ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಭರ್ಜರಿಯಾಗಿ ಮಳೆ ಕಾಣಿಸಿಕೊಂಡಿದೆ. ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ಮಳೆಯಾಗುತ್ತೆ ಅನ್ನೋ ವಾಡಿಕೆ ಇದೆ. ಅದರಂತೆ ಇಂದು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಕಾಣಿಸಿಕೊಂಡಿದೆ.
ಮಳೆಯಿಂದಾಗಿ ದೇವಸ್ಥಾನಗಳಿಗೆ ಪೂಜೆಗೆ ಹೋಗುವವರಿಗೆ ಸ್ವಲ್ಪ ತೊಂದರೆಯಾಯಿತು. ಮೋಡ ಮುಸುಕಿದ ವಾತಾವರಣ ಮುಂದುವರೆದಿದ್ದು, ಮತ್ತೆ ಮಳೆಯಾಗುವ ಲಕ್ಷಣಗಳಿವೆ. ಇದರ ನಡುವೆಯೂ ಹೆಣ್ಣು ಮಕ್ಕಳಿಗೆ ನಾಗಪ್ಪನಿಗೆ ಪೂಜೆ ಸಲ್ಲಿಸಲು ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ.