ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಚೆನ್ನೈ: ತಮಿಳುನಾಡಿನ ಖ್ಯಾತ ಗೀತರಚನೆಕಾರ ವೈರಮುತ್ತು ಅವರ ವಿರುದ್ಧ ಮೀಟು ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಅವರಿಗೆ ಬಂದಿರುವ ಒಎನ್ ವಿ ಕುರುಪ್ ಸಾಹಿತ್ಯ ಪ್ರಶಸ್ತಿಯನ್ನ ವಾಪಸ್ ಮಾಡಿದ್ದಾರೆ.
ಈ ಬಗ್ಗೆ ಮಾತ್ನಾಡಿರುವ ಅವರು, ನನ್ನ ವಿರುದ್ಧದ ಪ್ರತಿಭಟನೆಯಿಂದ ತೀರ್ಪುಗಾರರಿಗೆ ಮುಜುಗರವಾಗಾರದು. ಹಾಗೇ ವಿವಾದದ ನಡುವೆ ಪ್ರಶಸ್ತಿ ಸ್ವೀಕರಿಸುವುದನ್ನ ತಪ್ಪಿಸುತ್ತಿದ್ದೇನೆ. ಹೀಗಾಗಿ ಪ್ರಶಸ್ತಿ ವಾಪಸ್ ಮಾಡಿರುವುದಾಗಿ ತಿಳಿಸಿದ್ದಾರೆ.
ಅಕಾಡೆಮಿಯಿಂದ ಘೋಷಣೆಯಾಗಿರುವ 3 ಲಕ್ಷ ರೂಪಾಯಿ ಬಹುಮಾನದ ಹಣದ ಜೊತೆಗೆ ಸ್ವತಃ 2 ಲಕ್ಷ ರೂಪಾಯಿ ಸೇರಿಸಿ ಕೇರಳ ಸಿಎಂ ಪಬ್ಲಿಕ್ ರಿಲೀಫ್ ಫಂಡ್ ನೀಡುವಂತೆ ಮನವಿ ಮಾಡಿದ್ದಾರೆ.