ಪ್ರಜಾಸ್ತ್ರ ಸುದ್ದಿ
ವಡೋದರಾ: ವಂದೇ ಭಾರತ್ ರೈಲು ಗುರುವಾರ ಎಮ್ಮೆಯ ಹಿಂಡಿಗೆ ಗುದ್ದಿ ಹಾನಿಗೊಂಡಿತ್ತು. ಅಲ್ಲದೇ ನಾಲ್ಕು ಎಮ್ಮೆಗಳು ಪ್ರಾಣ ಕಳೆದುಕೊಂಡಿದ್ದವು. ಈ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿ ಆಯಿತು. ಪ್ರಧಾನಿ ಮೋದಿ ಚಲನೆ ನೀಡಿದ ವಾರದೊಳಗೆ ರೈಲಿನ ಪರಿಸ್ಥಿತಿಗೆ ಭಾರೀ ಟ್ರೋಲ್ ಮಾಡಲಾಯಿತು.
ಎಮ್ಮೆ ಹಿಂಡಿಗೆ ಗುದ್ದಿ ಹಾನಿಯಾದ ರೈಲಿನ ಸುರಕ್ಷತೆ ಬಗ್ಗೆ ಆತಂಕದೊಂದಿಗೆ ಸರ್ಕಾರ ಕಳಪೆ ಕೆಲಸ ಎಂದು ವಾಗ್ದಾಳಿ ನಡೆಸಲಾಯಿತು. ಈಗ ಹಸುವಿಗೆ ಗುದ್ದಿ ಮತ್ತೆ ಹಾನಿಯಾಗಿದೆ. ಗುಜರಾತಿನಿಂದ ಮುಂಬೈಗೆ ಹೊರಟಿದ್ದ ವೇಳೆ ಕಂಜಾರಿ-ಆನಂದ್ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ.