ವಿಧಾನ ಪರಿಷತ್ ಚುನಾವಣೆ: ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಘೋಷಣೆ

313

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದಾರೆ. ಸಿಎಂ ಬಿಎಸ್ವೈ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ಸುನೀಲ ವಲ್ಲ್ಯಾಪುರಗೆ ವಿಧಾನ ಪರಿಷತ್ ಟಿಕೆಟ್ ಒಲಿದಿದೆ.

ವಿಜಯಪುರ ಜಿಲ್ಲೆಯವರಾದ ವಲ್ಲ್ಯಾಪುರ, ಕಲಬುರಗಿಯನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. 2004ರಲ್ಲಿ ಶಹಾಬಾದನಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ರು. ಕ್ಷೇತ್ರ ವಿಗಂಡಣೆ ಬಳಿಕ 2008ರಲ್ಲಿ ಚಿಂಚೋಳಿಯಿಂದ ಸ್ಪರ್ಧಿಸಿ 2ನೇ ಬಾರಿಗೆ ಶಾಸಕರಾದ್ರು. ಮುಂದೆ 2013 ಹಾಗೂ 2018ರಲ್ಲಿ ಆಗ ಕಾಂಗ್ರೆಸ್ ನಲ್ಲಿದ್ದ ಉಮೇಶ ಜಾಧವ ವಿರುದ್ಧ ಸೋಲು ಅನುಭವಿಸಿದ್ರು.

ಸುನೀಲ ವಲ್ಲ್ಯಾಪುರ

2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಚಿಂಚೋಳ್ಳಿಯಿಂದ ಸ್ಪರ್ಧಿಸಲು ನೋಡಿದ್ರು. ಆದ್ರೆ, ಬಿಎಸ್ವೈ ವಿಧಾನ ಪರಿಷತ್ ಟಿಕೆಟ್ ನೀಡುವ ಭರವಸೆ ನೀಡಿದ್ಮೇಲೆ ಸುಮ್ಮನಾದ್ರು. ಇದೀಗ ಬಿಜೆಪಿ ಹೈಕಾಂಡ್ ಟಿಕೆಟ್ ನೀಡಿದೆ.

ಇನ್ನು ಜೆಡಿಎಸ್ ನಿಂದ ಕೋಲಾರದ ಗೋವಿಂದರಾಜು ಟಿಕೆಟ್ ನೀಡಲಾಗಿದೆ. ಜಿಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಅವರು, ಬಿ.ಫಾರಂ ನೀಡಿ ಶುಭ ಕೋರಿದ್ದಾರೆ. ಈ ವೇಳೆ ಮಾತ್ನಾಡಿದ ಹೆಚ್ಡಿಡಿ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷ ಬಲಪಡಿಸಲು ನಿಮ್ಗೆ ಜವಾಬ್ದಾರಿ ನೀಡಿದ್ದೇನೆ ಎಂದು ಹೇಳಿದ್ದಾರಂತೆ.




Leave a Reply

Your email address will not be published. Required fields are marked *

error: Content is protected !!