ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಿರ್ದೇಶಕ ರಾಮಗೋಪಾಲ ವರ್ಮಾಗೆ ವಿವಾದ ಹೊಸದಲ್ಲ. ಒಂದಲ್ಲ ಒಂದು ವಿವಾದದ ಕಿಡಿ ಹೊತ್ತಿಸುತ್ತಲೇ ಇರ್ತಾರೆ. ಇದೀಗ ವರ್ಮಾ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವರ್ಮಾ ಮಾಡಿರುವ ಟ್ವೀಟ್ ನಲ್ಲಿ, ನಿನಗೆ ಗೊತ್ತೆ? ಇಡೀ ಜಗತ್ತು ಚೂತ್ಯಗಳಿಂದಲೇ ತುಂಬಿ ಹೋಗಿದೆ ಎಂದು ವ್ಯಕ್ತಿಯೊಬ್ಬ ಹೇಳ್ತಾನೆ. ಅದಕ್ಕೆ ಅವನ ಪಕ್ಕದಲ್ಲಿ ಕುಳಿತ ನಾಯಿ ಹೌದು, ಆದರೆ ಬಹುತೇಕರು ರೋಗ ಲಕ್ಷಣ ಉಳ್ಳವರು ಎಂದಿದೆ.
ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಸೂಪರ್ ಎಂದಿದ್ದಾರೆ. ನಿರ್ದೇಶಕ ವರ್ಮಾ ಯಾವ ಕಾರಣಕ್ಕೆ ಈ ರೀತಿ ಪೋಸ್ಟ್ ಮಾಡಿದ್ದಾರೆ. ಇದರ ಮೂಲಕ ಏನು ಹೇಳಲು ಹೊರಟಿದ್ದಾರೆ ಅನ್ನೋದು ಗೊತ್ತಾಗ್ತಿಲ್ಲ. ಇದು ಬಾಲಿವುಡ್ ಅಂಗಳದಲ್ಲಿ ಸ್ವಜನಪಕ್ಷಪಾತದ ಬಗ್ಗೆ ಆಗ್ತಿರುವ ಚರ್ಚೆ ಬಗ್ಗೆ ಇರಬಹುದಾ ಅನ್ನೋ ಪ್ರಶ್ನೆ ಮೂಡಿದೆ.