ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯಾದ್ಯಂತ ಇಂದು ಮಾಸ್ಕ್ ದಿನಾಚರಣೆ ಆಚರಿಸಲಾಗ್ತಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಸ್ಕ್ ಧರಿಸಿಕೊಂಡು ಕಾಲ್ನಡಿಗೆ ನಡೆಸಿದ್ರು. ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಯಿಂದ ಕೆ.ಆರ್ ಸರ್ಕಲ್ ವರೆಗೂ ಕಾಲ್ನಡಿಗೆ ಮೂಲಕ ಕರೋನಾ ಜಾಗೃತಿ ಮೂಡಿಸಿದ್ರು.
ರಾಜ್ಯ ಸರ್ಕಾರದಿಂದ ಇಂದು ಮಾಸ್ಕ್ ಡೇ ಆಚರಿಸಲಾಗ್ತಿದೆ. ಕರೋನಾ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಆಚರಣೆ ಮಾಡಬೇಕು ಎಂದರು. ಇನ್ನು ರಾಜ್ಯದಲ್ಲಿ ಸೋಂಕು ಹೆಚ್ಚಾಗಲು ಹೊರರಾಜ್ಯದಿಂದ ಬಂದವರಿಂದ. ಅಲ್ಲಿಂದ ಬಂದಿಲ್ಲವೆಂದರೆ ನಮ್ಮಲ್ಲಿ ಸೋಂಕು ಪ್ರಮಾಣ ಹೆಚ್ಚಾಗುತ್ತಿರಲಿಲ್ಲವೆಂದು ಹೇಳಿದ್ದಾರೆ.
ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಆರ್ ಅಶೋಕ, ಎಸ್.ಟಿ ಸೋಮಶೇಖರ, ಸಿ ಟಿ ರವಿ, ನಟ ಪುನೀತರಾಜಕುಮಾರ, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಹಲವು ಭಾಗವಹಿಸಿದ್ರು.