ಪ್ರಜಾಸ್ತ್ರ ಸುದ್ದಿ
ಕೋಲಾರ: ಭಾರತದೊಂದಿಗೆ ಸುಖಾಸುಮ್ಮನೆ ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಿರುವ ಚೀನಾ ವಿರುದ್ಧ ಭಾರತೀಯ ಸೇನಾ ಪಡೆ ತೊಡೆ ತಟ್ಟಿದೆ. ನಮ್ಮ ಯೋಧರ ಹುತಾತ್ಮಕ್ಕೆ ಸೈನಿಕರು ಪ್ರತಿಕಾರ ತೀರಿಸಿಕೊಂಡಿದ್ದಾರೆ. ಇತ್ತ ದೇಶದೊಳಗೆ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನಗರದ ಬಸ್ ನಿಲ್ದಾಣದ ಹತ್ತಿರ ಬಜರಂಗದಳದ ಕಾರ್ಯಕರ್ತರು, ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರು. ಇದೇ ವೇಳೆ ಚೀನಾ ಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ನರಿಬುದ್ದಿ ತೋರಿಸ್ತಿರುವ ಚೀನಾ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು, ಅವರ ಉತ್ಪನ್ನಗಳನ್ನ ನಿಷೇಧಿಸಬೇಕೆಂದು ಕೂಗಿದ್ರು.