ನಿರ್ದೇಶಕ ಆರ್ ಜಿವಿ ಹತ್ಯೆಗೆ 1 ಕೋಟಿ ಘೋಷಣೆ

210

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಭಾರತೀಯ ಸಿನಿ ರಂಗದ ವಿವಾದಾತ್ಮಕ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ನಿರ್ದೇಶನದ ವ್ಯೂಹಂ ಸಿನಿಮಾ ಶುಕ್ರವಾರ ರಿಲೀಸ್ ಆಗುತ್ತಿದೆ. ಈ ಚಿತ್ರವೂ ವಿವಾದ ಸೃಷ್ಟಿಸಿದೆ. ಆರ್ ಜಿವಿ ತಲೆ ಕಡೆದು ತಂದವರಿಗೆ 1 ಕೋಟಿ ರೂಪಾಯಿ ನೀಡಲಾಗುವುದು ಎಂದು ವಿವಾದಾತ್ಮಕ ಹೇಳಿಕೆಯೊಂದು ಕೇಳಿ ಬಂದಿದೆ.

ಸಿನಿಮಾದಲ್ಲಿ ತೆಲಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಪಕ್ಷದ ನಾಯಕ, ನಟ ಪವನ್ ಕಲ್ಯಾಣ್ ಅವರನ್ನು ಅಗೌರವಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ದೂರಲಾಗಿದೆ. ಈ ಕುರಿತು ನಡೆದ ಟಿವಿ ಚರ್ಚೆಯಲ್ಲಿ ಅಮರಾವತಿ ಚಳವಳಿಯ ನಾಯಕ ಕೊಲಿಕಿ ಪುಡಿ ಶ್ರೀನಿವಾಸರಾವ್, ರಾಮ್ ಗೋಪಾಲ್ ವರ್ಮಾ ತಲೆ ಕಡೆದವರಿಗೆ 1 ಕೋಟಿ ರೂಪಾಯಿ ಘೋಷಿಸಿ ಮತ್ತೊಂದು ವಿವಾದ ಎಬ್ಬಿಸಿದ್ದಾರೆ.

ಈ ಕುರಿತು ನಿರ್ದೇಶಕ ಆರ್ ಜಿವಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಅದನ್ನು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕೊಲಿಕಿ ಪುಡಿ ಶ್ರೀನಿವಾಸರಾವ್, ಟಿವಿ ನಿರೂಪಕ ಸಾಂಬಶಿವರಾವ್, ವಾಹಿನಿ ಮಾಲೀಕ ಬಿ.ಆರ್ ನಾಯ್ಡು ವಿರುದ್ಧ ದೂರು ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!