ಪ್ರಜಾಸ್ತ್ರ ಸುದ್ದಿ
ಸಿಂದಗಿ: ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಶ್ರೀ ಬಸವೇಶ್ವರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು, ತಾಲೂಕ ವಿಶ್ವಹಿಂದು ಪರಿಷತ್ ಸಹ-ಕಾರ್ಯದರ್ಶಿ ಶಿವಾನಂದ ತಾವರಖೇಡ ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭವಾಗಿದ್ದು, ನಮ್ಮೆಲ್ಲರಿಗೂ ಸಂತೋಷದ ವಿಷಯ. ವಿಜಯಪುರ ಜಿಲ್ಲೆ ವಿಶ್ವಗುರು ಬಸವಣ್ಣನವರು ಜನಿಸಿದ ಪವಿತ್ರ ಕ್ಷೇತ್ರವಾಗಿದೆ. ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ, ಪ್ರಥಮವಾಗಿ ಅನುಭವಮಂಟಪವನ್ನು ರಚಿಸಿ, ಸಂವಿಧಾನದ ಕಲ್ಪನೆಯನ್ನು ಕೊಟ್ಟವರೇ ವಿಶ್ವಗುರು ಬಸವಣ್ಣನವರು. ಇಂಥ ಮಹಾ ಮಹನೀಯರ ಹೆಸರು ನಾಮಕರಣ ಮಾಡುವುದು ಅತ್ಯಂತ ಅವಶ್ಯಕ ಮತ್ತು ಸೂಕ್ತ ಎಂದು ಶಿವಾನಂದ ತಾವರಖೇಡ ಆಗ್ರಹಿಸಿದ್ದಾರೆ.