ಕ್ರಿಕೆಟ್ ಅಂಗಳಕ್ಕೆ ಶ್ರೀಶಾಂತ ರೀ ಎಂಟ್ರಿ

313

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದು 7 ವರ್ಷಗಳ ಕಾಲ ನಿಷೇಧ ಶಿಕ್ಷೆ ಅನುಭವಿಸಿ ವಾಪಸ್ ಮರಳಿರುವ ಫಾಸ್ಟ್ ಬೌಲರ್ ಶ್ರೀಶಾಂತ, ಅಂಗಳಕ್ಕೆ ರೀ ಎಂಟ್ರಿ ಮಾಡ್ತಿದ್ದಾರೆ. ಡಿಸೆಂಬರ್ ನಲ್ಲಿ ನಡೆಯಲಿರುವ ಕೇರಳ ಪ್ರೆಸಿಡೆಂಟ್ಸ್ ಕಪ್ ಟಿ-20 ಟೂರ್ನಿಯಲ್ಲಿ 37 ವರ್ಷದ ಬೌಲರ್ ಶ್ರೀಶಾಂತ ಆಡುವುದು ಪಕ್ಕಾ ಆಗಿದೆ.

ಕೇರಳ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಕ್ರಿಕೆಟ್ ಟೂರ್ನಿಗೆ ಸರ್ಕಾರದಿಂದ ಅನುಮತಿ ಸಿಗಬೇಕಿದೆ. ದಿನಾಂಕ ಸಹ ನಿಗದಿಯಾಗಿಲ್ಲ. ಆದ್ರೆ, ಡಿಸೆಂಬರ್ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗ್ತಿದೆ. 2005ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಶ್ರೀಶಾಂತ, 2013ರ ಐಪಿಎಲ್ ನಲ್ಲಿ ರಾಜಸ್ಥಾನ ಪರ ಆಡ್ತಿರುವಾಗ ಸ್ಪಾಟ್ ಫಿಕ್ಸಿಂಗ್ ಕೇಸಿನಲ್ಲಿ ಸಿಕ್ಕಿಬಿದ್ದರು.

ಜೈಲು ಶಿಕ್ಷೆ ಸೇರಿದಂತೆ ಆಜೀವ ನಿಷೇಧಕ್ಕೆ ಒಳಪಟ್ಟಿದ್ದ ಶ್ರೀಶಾಂತ, ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿ ಶಿಕ್ಷೆಯ ಪ್ರಮಾಣ ಕಡಿಮೆಗೊಳಿಸುವಲ್ಲಿ ಸಕ್ಸಸ್ ಆಗಿ 7 ವರ್ಷ ಕ್ರಿಕೆಟ್ ಅಂಗಳದಿಂದ ದೂರವಾದ್ರು. ಕಳೆದ ಸೆಪ್ಟೆಂಬರ್ ನಲ್ಲಿ ನಿಷೇಧ ಅಂತ್ಯವಾಗಿದೆ.




Leave a Reply

Your email address will not be published. Required fields are marked *

error: Content is protected !!