ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಯಡಿಯೂರಪ್ಪ ಅವಧಿಯಲ್ಲಿ ನೇಮಕವಾಗಿದದ್ದ ನಿಗಮ ಮಂಡಳಿ ಅಧ್ಯಕ್ಷರುಗಳು ಶೀಘ್ರ ಕಿಕ್ಔಟ್ ಕೊಡಲು ಮುಂದಾದ ಹೈಕಮಾಂಡ್.
ಶಾಸಕರು ಇಲ್ಲದಿದ್ರೂ 20ಕ್ಕೂ ಹೆಚ್ಚು ಮಂದಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅವರೆಲ್ಲರಿಗೂ ಗೇಟ್ ಪಾಸ್ ಕೊಡುವ ಮೂಲಕ ಯಡಿಯೂರಪ್ಪ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಕೊಕ್ಕೆ ಹಾಕಲು ಮುಂದಾಗಿದೆ.
ನಿಗಮ ಮಂಡಳಿ ಅಧ್ಯಕ್ಷರುಗಳಿಗೆ ಗೇಟ್ ಪಾಸ್ ಕೊಟ್ಟು ಅವರ ಸ್ಥಾನಕ್ಕೆ ಬಿಜೆಪಿ ಶಾಸಕರನ್ನು ನೇಮಿಸಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.