ಪ್ರಜಾಸ್ತ್ರ ಸುದ್ದಿ
ಮಂಡ್ಯ: ಇತ್ತೀಚೆಗಷ್ಟೇ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ದಿಢೀರ್ ಎಂದು ರದ್ದುಗೊಳಿಸಲಾಯಿತು. ಇದರ ಜೊತೆಯಲ್ಲೇ ನಗರಾಭಿವೃದ್ಧಿ ಅಧ್ಯಕ್ಷರ ನೇಮಕವೂ ರದ್ದುಗೊಳಿಸಲಾಯಿತು. ಈ ಬಗ್ಗೆ ಗುರುವಾರ ಕೆ.ಆರ್ ಪೇಟೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ದೆಹಲಿಗೆ ಹೋಗಿ ಬಂದ ಮೇಲೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದಿದ್ದಾರೆ.
ಇನ್ನು ಈಶ್ವರಪ್ಪ ಸಂಪುಟ ಸೇರ್ಪಡೆ ಬಗ್ಗೆ ಈಗೇನಿಲ್ಲ. ಪ್ರಕರಣ ಫೈನಲ್ ಆಗಲಿ ನೋಡೋಣ ಎಂದರು. ಮುಖ್ಯಮಂತ್ರಿಯಾಗುವುದು ಜನ ತೀರ್ಮಾನ ಮಾಡುತ್ತಾರೆ. ಅವರವರೇ ತೀರ್ಮಾನ ಮಾಡುವುದಲ್ಲ. ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಅವಕಾಶ ಕೊಡಿ ಅಂತಿದ್ದಾರೆ. ಮತ್ತೊಬ್ಬರು ನನಗೂ ಅವಕಾಶ ಕೊಡಿ ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.