ವಿಜಯಪುರ ಜಿ.ಪಂ ಎಲೆಕ್ಷನ್: ಪಕ್ಷ ವಿರೋಧಿ ಖಂಡಿಸಿ ‘ಕೈ’ ಪ್ರತಿಭಟನೆ

486

ಪ್ರಜಾಸ್ತ್ರ ಸುದ್ದಿ

ಇಂಡಿ: ಕಳೆದ ಜೂನ್ 30ರಂದು ನಡೆದ ವಿಜಯಪುರ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ, ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯ್ತು.

ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶಿವಯೋಗೆಪ್ಪ ನೇದಲಗಿ, ಉಮೇಶ ಕೊಳಕೂರ, ಸದಸ್ಯ ಶಿವಶರಣ ಭೈರಗೊಂಡ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಹೇಳಿ, ಇಂಡಿ ಬ್ಲಾಕ್ ಹಾಗೂ ಯುವ  ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಸದಸ್ಯರ ಪ್ರತಿಕೃತಿ ದಹಿಸಲಾಯ್ತು.

ಕಲ್ಲನಗೌಡ ಬಿರಾದಾರ, ಯುವ ಕಾಂಗ್ರೆಸ್ ಅಧ್ಯಕ್ಷ ಅವಿನಾಶ ಬಗಲಿ, ಜಿ.ಪಂ ಸದಸ್ಯ ಹಣಮಂತ ಖಂಡೇಕರ, ತಾ.ಪಂ ಅಧ್ಯಕ್ಷರಾದ ಅಣ್ಣಪ್ಪ ಬಿದರಕೋಟೇ, ಜೀತಪ್ಪ ಕಲ್ಯಾಣಿ, ಅಶೋಕ ಕರೋರ, ಶಿವಯೋಗೆಪ್ಪ ಜೋತಗೊಂಡ, ಅರವಿಂದ ಯಳಸಂಗಿ, ಮಲ್ಲು ಬಾಸಗಿ, ಸದಾಶಿವ ಪ್ಯಾಟಿ, ತಮ್ಮಣ್ಣ ಪೂಜಾರಿ, ಶ್ರೀಕಾಂತ ಕೊಡಿಗನೋರ, ಪ್ರಶಾಂತ ಕಾಳೆ, ಸತ್ತಾರ ಭಾಗವಾನ, ರುಖುಮುದ್ದಿನ ತದ್ದೇವಾಡಿ, ಮುತ್ತಪ್ಪ ಪೋತೆ, ಯಮುನಾಜಿ ಸಾಳುಂಕೆ ಸೇರಿ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!