ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ಆಪ್ ಬರೆದುಕೊಂಡಿದ್ದು, ಸಿಎಂ ಕೇಜ್ರಿವಾಲ್ ಇದೊಂದು ವ್ಯವಸ್ಥಿತ ಹಾಗೂ ಹಿಂಸಾತ್ಮಕ ದಾಳಿ ಎಂದಿದ್ದಾರೆ.
ಡಿಸಿಎಂ ಸಿಸೋಡಿಯಾ ಮನೆಯಲ್ಲಿ ಇರದೆ ಇರುವ ಸಂದರ್ಭದಲ್ಲಿ ದಾಳಿ ಮಾಡಿರುವುದಾಗಿ ಆಪ್ ತಿಳಿಸಿದ್ದು, ವಿಡಿಯೋವನ್ನ ಟ್ವೀಟರ್ ನಲ್ಲಿ ಶೇರ್ ಮಾಡಿದೆ. ಮನೆಯ ಬಾಗಿಲು, ಕಿಟಕಿ ಮುರಿದಿದ್ದು, ಸಿಸೋಡಿಯಾ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.