‘ಯಜಮಾನ’ರ ವಿರುದ್ಧ ಕೆಟ್ಟ ಮಾತು.. ತೆಲುಗು ನಟನ ವಿರುದ್ಧ ಎಲ್ಲೆಡೆ ಆಕ್ರೋಶ

267

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ದಕ್ಷಿಣ ಭಾರತದ ಖ್ಯಾತ ಸೂಪರ್ ಸ್ಟಾರ್ ದಿವಂಗತ ಡಾ.ವಿಷ್ಣುವರ್ಧನ ಅವರ ಬಗ್ಗೆ ಕೆಟ್ಟದಾಗಿ ಮಾತ್ನಾಡಿರುವ ತೆಲುಗು ನಟ ವಿಜಯ ರಂಗರಾಜು ವಿರುದ್ಧ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ರಂಗರಾಜು ವಿರುದ್ಧ ವಾಗ್ದಾಳಿ ನಡೆಸಲಾಗ್ತಿದೆ.

ಈಗಾಗ್ಲೇ ವಿಷ್ಣು ಸೇನಾದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಅಧ್ಯಕ್ಷ ಬಣಕಾರ ಅವರಿಗೆ ದೂರು ನೀಡಿದ್ದು, ರಂಗರಾಜು ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನು ನವರಸ ನಾಯಕ ಜಗ್ಗೇಶ ಮಾತ್ನಾಡಿದ್ದು, ಯಾರೀ ಇವನು ನಟವಂತೆ. ಇವನು ಯಾವ ಚಿತ್ರದಲ್ಲಿ ನಟಿಸಿದ್ದಾನೆ ಗೊತ್ತಿಲ್ಲ. ಕನ್ನಡಿಗರ ತಾಕತ್ತು ಏನು ಅನ್ನೋದು ಅವನಿಗೆ ತೋರಿಸಿ ಎಂದಿದ್ದಾರೆ.

ವಿಷ್ಣು ಅಭಿಮಾನಿಗಳು ಉಡಾಫೆಯಾಗಿ ಮಾತ್ನಾಡಿರುವ ರಂಗರಾಜು ವಿರುದ್ಧ ಕಿಡಿ ಕಾರಿದ್ದಾರೆ. ಕರ್ನಾಟಕಕ್ಕೆ ಕಾಲಿಟ್ಟು ನೋಡು. ವಾಪಸ್ ನಿನ್ನೂರಿಗೆ ಹೋಗುವುದಿಲ್ಲವೆಂದಿದ್ದಾರೆ. ಅಲ್ದೇ, ಕೂಡಲೇ ಯೂಟ್ಯೂಬ್ ನಲ್ಲಿರುವ ವಿಡಿಯೋ ಡಿಲೀಟ್ ಮಾಡಿ ಎಂದಿದ್ದಾರೆ. ಈ ಮೂಲಕ ಪ್ರಚಾರಕ್ಕಾಗಿ ಯಾವನೋ ಆಡಿದ ಮಾತಿಗೆ ವಿಷ್ಣು ಗೌರವ, ಖ್ಯಾತಿ ಕಡಿಮೆಯಾಗುವುದಿಲ್ಲ ಅನ್ನೋದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!