ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಸ್ಯಾಂಡಲ್ ವುಡ್ ಸಾಹಸಸಿಂಹ ಡಾ.ವಿಷ್ಣುವರ್ಧನ ಅವರ 11ನೇ ಪುಣ್ಯ ಸ್ಮರಣೆ. ಸೌಥ್ ಸಿನಿ ಪ್ರಪಂಚದ ಅತ್ಯಂತ ಸುಂದರ ನಟ ಎಲ್ಲರನ್ನ ಅಗಲಿ ಇಂದಿಗೆ 11 ವರ್ಷ ಕಳೆದಿವೆ.
ಡಾ.ವಿಷ್ಣು ಕುಟುಂಬಸ್ಥರು ಮನೆಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಅಭಿಮಾನಿ ಸಂಘಟನೆಯ ಮುಖಂಡರು, ಅಭಿಮಾನಿಗಳು ಅಭಿಮಾನ ಸ್ಟುಡಿಯೋದಲ್ಲಿ ಇರುವ ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ನೆಚ್ಚಿನ ನಟನ ಸ್ಮರಿಸಿಕೊಳ್ತಿದ್ದಾರೆ.
ಇತ್ತೀಚೆಗೆ ಡಾ.ವಿಷ್ಣುವರ್ಧನ ಅವರ ಎರಡು ವಿಚಾರಗಳಲ್ಲಿ ಒಂದಿಷ್ಟು ಗಲಾಟೆ ಆಯ್ತು. ತೆಲುಗು ನಟನೊಬ್ಬ ವಿವಾದಾತ್ಮಕ ಹೇಳಿಕೆ ನೀಡಿದ್ದು ಮತ್ತು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಷ್ಣು ಮೂರ್ತಿ ದ್ವಂಸ ಮಾಡಿರುವುದು ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ.