ವೈಯನಾಡ್ ಉಪ ಚುನಾವಣೆಗೆ ಅವಸರವಿಲ್ಲ: ಚುನಾವಣೆ ಆಯೋಗ

159

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಇದರ ಜೊತೆಗೆ ಕೇರಳದ ವೈಯನಾಡ್ ಲೋಕಸಭಾ ಕ್ಷೇತ್ರಕ್ಕೆ ದಿನಾಂಕ ಘೋಷಣೆ ಮಾಡಲಾಗುತ್ತೆ ಎಂದು ಭಾವಿಸಲಾಗಿತ್ತು. ಆದರೆ, ಅದು ಹಾಗಾಗಿಲ್ಲ.

ಈ ಬಗ್ಗೆ ಮಾತನಾಡಿರುವ ಚುನಾವಣಾ ಆಯೋಗದ ಆಯುಕ್ತ ರವಿಕುಮಾರ್, ಉಪ ಚುನಾವಣೆಗೆ ನಾವು ಅವಸರ ಮಾಡುವುದಿಲ್ಲ. ಮಾರ್ಚ್ ನಲ್ಲಿ ಸ್ಥಾನ ತೆರವಾಗಿದೆ. ಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 30 ದಿನ ಕಾಲಾವಕಾಶ ನೀಡಲಾಗಿದೆ. ಜನಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಉಪ ಚುನಾವಣೆ ನಡೆಸಲು 6 ತಿಂಗಳು ಸಮಯ ಇರುತ್ತೆ ಎಂದು ಹೇಳಲಾಗಿದೆ.

ಮೋದಿ ಉಪನಾಮದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ, ಗುಜರಾತಿನ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ನೀಡಿದೆ. ಹೀಗಾಗಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!