ಆತ್ಮಹತ್ಯೆ ಎಂದು ಬಿಂಬಿಸಿದ್ದ ಮಹಿಳೆ ಸಾವಿನ ರಹಸ್ಯ ಬಯಲು

402

ಪ್ರಜಾಸ್ತ್ರ ಅಪರಾಧ ಸುದ್ದಿ

ಬಾಗಲಕೋಟೆ: ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಜೂನ್ 7ರಂದು ಮಹಿಳೆಯೊಬ್ಬರು ಸಾವನ್ನಪ್ಪುತ್ತಾರೆ. 40 ವರ್ಷದ ಮಹಾದೇವಿ ಅನ್ನೋ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿ ತರಾತುರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿರುತ್ತಾರೆ.

ಈ ಸಾವಿನ ಬಗ್ಗೆ ಅನಾಮಿಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿ, ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುತ್ತಾನೆ. ಆತನ ಮಾಹಿತಿ ಆಧಾರದ ಮೇಲೆ ಸಾವಳಗಿ ಠಾಣೆ ಪೊಲೀಸರು ಹಾಗೂ ಜಮಖಂಡಿ ಠಾಣೆ ಸಿಪಿಐ ತನಿಖೆ ನಡೆಸಿದಾಗ ಸತ್ಯ ಹೊರ ಬಂದಿದ್ದು, ಮಹಿಳೆಯ ಪತಿ ಹಾಗೂ ಅಪ್ರಾಪ್ತ ಮಗ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಮಹಾದೇವಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿ ಹನುಮಂತಪ್ಪ ಹಾಗೂ 14 ವರ್ಷದ ಮಗ ಸೇರಿಕೊಂಡು ಈ ಕೃತ್ಯವೆಸಗಿರುವುದು ತಿಳಿದು ಬಂದಿದೆ. ಇಬ್ಬರನ್ನ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!