ಸಚಿವ ಜೋಶಿ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು

262

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಮಳೆಗಾಲದಲ್ಲಿ ಬಿದ್ದು ಹೋದ ಮನೆಗೆ ಪರಿಹಾರ ಸಂಬಂಧ ಎಲ್ಲ ಕಡೆ ಸುತ್ತಾಟ ನಡೆಸಿದ ಮಹಿಳೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆ ಮುಂದೆ ಏಪ್ರಿಲ್ 7ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಿಸದೆ ಶುಕ್ರವಾರ ನಿಧನರಾಗಿದ್ದಾರೆ.

ಗರಗ ಗ್ರಾಮದ ಶ್ರೀದೇವಿ ಈರಣ್ಣ ಕಮ್ಮಾರ ಅನ್ನೋ ಮಹಿಳೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಐದಾರು ತಿಂಗಳಿನಿಂದ ಶಾಸಕ ಅಮೃತ ದೇಸಾಯಿ ಹಾಗೂ ಕೇಂದ್ರ ಸಚಿವ ಪಲ್ಹಾದ ಜೋಶಿ ಬಳಿ ಸುತ್ತಾಡಿದ್ದಾರೆ. ಈ ಬಗ್ಗೆ ಪತ್ರದಲ್ಲಿ ಬರೆದಿರುವ ಅವರು, ಶಾಸಕರ ಬಳಿ ಹೋದ್ರೆ ಕೇಂದ್ರ ಸಚಿವರ ಬಳಿ ಹೋಗಿ ಅಂತಾರೆ. ಸಚಿವರ ಬಳಿ ಹೋದ್ರೆ ಶಾಸಕರಿಗೆ ಹೇಳುತ್ತೇನೆ ಅವರ ಹತ್ತಿರ ಹೋಗಿ ಅಂತಾರೆ. ಇದ್ರಿಂದ ಮನನೊಂದು ವಿಷ ಕುಡಿಯುತ್ತಿದ್ದೇನೆ ಎಂದು ಬರೆದಿದ್ದರು.




Leave a Reply

Your email address will not be published. Required fields are marked *

error: Content is protected !!