ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಇತ್ತ ಸರ್ಕಾರ 6ನೇ ವೇತನ ಆಯೋಗ ಸಾಧ್ಯವಿಲ್ಲ ಅಂತಿದೆ. ನಮ್ಗೆ 6ನೇ ವೇತನ ಆಯೋಗ ಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಇದ್ರಿಂದಾಗಿ ಪಾಸ್ ಹೊಂದಿದವರು ಸರ್ಕಾರ ಹಾಗೂ ಸಾರಿಗೆ ನೌಕರರ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಪಾಸ್ ಹೊಂದಿದರೂ ನಮ್ಗೆ ಸೌಲಭ್ಯ ನೀಡ್ತಿಲ್ಲ. ಇದು ಸೇವಾ ನ್ಯೂನ್ಯತೆ ಆಗುತ್ತೆ. ಹೀಗಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅಕಾಡೆಮಿ ಆಫ್ ಟೆಕ್ನಿಕಲ್ ವಿದ್ಯಾರ್ಥಿನಿ ಪಾವನಾ, ವಕೀಲರ ಮೂಲಕ ಬಿಎಂಟಿಸಿ ಎಂಡಿ ಶಿಖಾ ಹಾಗೂ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರಗೆ ನೋಟಿಸ್ ನೀಡಿದ್ದಾಳೆ ಎಂದು ಹೇಳಲಾಗ್ತಿದೆ.