ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ನಡುವಿನ ವಾಕ್ಸಮರ ಮುಂದುವರೆದಿದೆ. ಅಲ್ದೇ, ಕೋಡಿಹಳ್ಳಿ ವಿರುದ್ಧ ದಾಖಲೆ ಸಮೇತ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
2012ರಲ್ಲಿ ಸೈಟ್ ಕೊಡಿಸ್ತೀನಿ ಎಂದು 200 ಜನರಿಂದ 6-8 ಲಕ್ಷ ಹಣ ಪಡೆದ ಬ್ಲ್ಯಾಕ್ ಮೇಲರ್. ಎಲ್ಲರಿಗೂ ಹೆದರಿಸಿ ಸುಮ್ಮನಾಗಿಸಿದ್ರು. ಆದ್ರೆ, ಜಿ.ಭರಯ್ಯ ಎಂಬುವರು ಕೇಸ್ ಮಾಡಿದ್ದರು. ಅದರ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಆಗಿನ ಕಾಂಗ್ರೆಸ್ ಸರ್ಕಾರ ಇವರಿಗೆ ರಕ್ಷಣೆ ನೀಡಿತು. ಹಸಿರು ಶಾಲಿಗೆ ಅವಮಾನ ಮಾಡ್ತಿದ್ದಾರೆ ಎಂದು ಕಿಡಿ ಕಾರಿದ್ರು.
ಕೇವಲ ಎರಡೂವರೆ ಎಕರೆ ಜಮೀನಿದೆ ಇದೆ ಅನ್ನೋ ಇವರಿಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು. ಆದಾಯದ ಮೂಲ ಬಹಿರಂಗ ಮಾಡಲಿ. ಈ ಬಗ್ಗೆ ಕೃಷಿ ಹಾಗೂ ಕಂದಾಯ ಸಚಿವರ ಜೊತೆ ಮಾತ್ನಾಡಿ ತನಿಖೆ ಮಾಡಿಸುತ್ತೇನೆ ಎಂದು ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ರು.