ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ರೈತ ವಿರೋಧಿ ಕಾಯ್ದೆಗಳಾದ ಕೃಷಿ ಕಾಯ್ದೆ ಹಾಗೂ ಭೂಸುಧಾರಣಾ ಕಾಯ್ದೆಯನ್ನು ರದ್ದುಪಡಿಸುವಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಿಎಂಗೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ ಕಾಯ್ದೆ ಹಿಂಪಡೆಯುವ ಸಂಬಂಧ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಇತ್ತು. ಆದ್ರೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಸದನದಲ್ಲಿ ಮಾತನಾಡುತ್ತಿಲ್ಲ. ಪರಿಶೀಲನೆ ಮಾಡುತ್ತೇನೆ ಎಂದು ಹೇಳುವ ಬದಲು ವಾಪಸ್ ಪಡೆಯಬೇಕು ಎಂದರು.
ಎಂಎಸ್ ಪಿ ಜಾರಿಗೆ ಬಗ್ಗೆ ಪ್ರಧಾನಿ ಮೋದಿ ಅವರು ಅಧಿಕಾರಕ್ಕೂ ಮೊದಲು ಹೇಳಿದ್ದರು. ಆದರೆ, ಇದುವರೆಗೂ ಜಾರಿಗೆ ತಂದಿಲ್ಲ. ಎಂಎಸ್ ಪಿ ವಿಚಾರದಲ್ಲಿ ಸ್ವಾಮಿನಾಥನ್ ವರದಿ ಮಾನದಂಡವಾಗಬೇಕು. ಇದು ಕಾರ್ಪೂರೇಟ್ ಕಂಪನಿಗಳ ಕೈಗೆ ಹೋಗಬಾರದು. ಅವರು ಲಾಭಕ್ಕಾಗಿ ಮಾಡುತ್ತಾರೆ ಅಂತಾ ವಾಗ್ದಾಳಿ ನಡೆಸಿದರು.