ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಮ ಪಂಚಾಯತಿ ಸದಸ್ಯ ಈರಪ್ಪ ಕೋಟೆಗೋಳ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ತಳವಾರ ಸಮಾಜದ ಯುವ ಮುಖಂಡ ಮಡಿವಾಳ ನಾಯ್ಕೋಡಿ ಮಾತನಾಡಿ, ಜಗತ್ತಿನ ಅತಿ ದೊಡ್ಡ ಸಂವಿಧಾನ ನಮ್ಮ ಭಾರತ ಸಂವಿಧಾನವಾಗಿದೆ. ಅದನ್ನು ಗೌರವಿಸಿ ಅದರಲ್ಲಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳಂತೆ ನಡೆಯೋಣ ಎಂದರು.
ಮಲ್ಲಣ್ಣ ನಾಯ್ಕೋಡಿ, ಬಸವರಾಜ ತಳವಾರ, ಮೋದಿನ್ ಶಾಬಾದಿ, ಬಾಬು ಜಾಲವಾದಿ, ಮಹಾಂತೇಶ ನಾಯ್ಕೋಡಿ, ವಿರೇಶ ನಾಯ್ಕೋಡಿ, ಮಹಾಂತೇಶ ನಾಯ್ಕೋಡಿ, ಗೋಲ್ಲಾಳ ತಳವಾರ, ರಮೇಶ ನಾಯ್ಕೋಡಿ, ಮೈಬೂಬ ಶಾಬಾದಿ ಸೇರಿ ಇತರರು ಉಪಸ್ಥಿತರಿದ್ದರು.