ಸಿಂದಗಿಯ ವುಡ್ ಕಲಾವಿದ ಈರಣ್ಣರಿಗೆ ನ್ಯಾಷನಲ್ ಪ್ರಶಸ್ತಿ

424

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ವುಡ್ ಕಲಾವಿದ ಈರಣ್ಣ ಬಡಗೇರ ಅವರಿಗೆ ನ್ಯಾಷನಲ್ ಗೋಲ್ಡ್ ಪ್ರಶಸ್ತಿ ಲಭಿಸಿದೆ. ಸಿಂಧನೂರಿನ ಕಲಾ ಕುಟುಂಬ ಸಾಂಸ್ಕೃತಿಕ ಕಲಾ ಸಂಘ ಆಯೋಜಿಸಿದ್ದ ಆನ್ಲೈನ್ ನ್ಯಾಷನಲ್ ಆರ್ಟ್ ಕಾಂಪಿಟೇಷನ್ ನಲ್ಲಿ ಕಲಾವಿದ ಈರಣ್ಣನವರಿಗೆ ‘ಶಂಕರಗೌಡ ಬೆಟ್ಟದೂರ ನ್ಯಾಷನಲ್’ ಪ್ರಶಸ್ತಿ ಬಂದಿದೆ.

ಗುಜರಾತಿನ ಸೂರತ್ ಕಲಾವಿದ ಸಂದೀಪ ಸುನೆರಿಯಾ ಮೊದಲ ಪ್ರಶಸ್ತಿ ಪಡೆದಿದ್ದಾರೆ. 10 ಮಂದಿ ಗೋಲ್ಡ್ ಪ್ರಶಸ್ತಿ ಪಡೆದಿದ್ದು, ಅದರಲ್ಲಿ 4 ಜನ ಕರ್ನಾಟಕದವರಾಗಿದ್ದಾರೆ. ಇವರಲ್ಲಿ ಸಿಂದಗಿಯ ಈರಣ್ಣ ಬಡಗೇರ ಒಬ್ಬರಾಗಿದ್ದಾರೆ. ವರಕವಿ ದ.ರಾ ಬೇಂದ್ರೆ ಅವರ ಚಿತ್ರವನ್ನ ಸಂಪೂರ್ಣವಾಗಿ ಕಟ್ಟಿಗೆ ಚೂರುಗಳಿಂದ ತಯಾರಿಸಿದ್ದು, ಇದಕ್ಕೆ ಪ್ರಶಸ್ತಿ ಲಭಿಸಿದೆ. ಡಿಸೆಂಬರ್ 22, 2019ರಂದು ಪ್ರಜಾಸ್ತ್ರ ವೆಬ್ ಪತ್ರಿಕೆಯಿಂದಲೂ ಇವರನ್ನ ಗೌರವಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!