ಬೆಂಗಳೂರು/ವಿಜಯಪುರ: ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ, ಮಾಜಿ ಸಚಿವ ಡಿ.ಕೆ ಶಿವಕುಮಾರ 204 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಯತ್ನಾಳ ವಿರುದ್ಧ ಇದೀಗ ಸಮೆನ್ಸ್ ಜಾರಿ ಮಾಡಲಾಗಿದ್ದು, ಸೆಪ್ಟಂಬರ್ 18ರಂದು ವಿಚಾರಣೆಯನ್ನ ನಿಗದಿ ಮಾಡಲಾಗಿದೆ.
ಡಿ.ಕೆ ಶಿವಕುಮಾರ ವಿರುದ್ಧ ದಾಖಲಾಗಿರುವ ಐಟಿ, ಇಡಿ ಪ್ರಕರಣದಿಂದ ಮುಕ್ತಗೊಳಿಸುವಂತೆ ಕೇಂದ್ರ ಸಚಿವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ನನ್ನ ವಿರುದ್ಧದ ಪ್ರಕರಣಗಳನ್ನ ಮುಕ್ತಾಯಗೊಳಿಸಿದ್ರೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ನನ್ನ ವಿರೋಧವಿಲ್ಲ ಎಂದು ಭರವಸೆ ನೀಡಿದ್ರು ಅಂತಾ ಯತ್ನಾಳ ಅವರು ಸುಳ್ಳು ಆರೋಪ ಮಾಡಿದ್ದಾರೆ. ಇದು ಎಲ್ಲ ಮಾಧ್ಯಮಗಳಲ್ಲಿ ಬಂದಿದೆ.
ಯತ್ನಾಳ ಅವರು ಸುಳ್ಳು ಆರೋಪ ಮಾಡಿದ್ದಾರೆ. ನನ್ನ ಪ್ರಾಮಾಣಿಕತೆ, ನೈತಿಕತೆ, ಪತ್ರಿಷ್ಠೆ ಹಾಗೂ ವರ್ಚಸ್ ಗೆ ಧಕ್ಕೆಯಾಗಿದೆ. ಅವರ ಬೇಜಾವಾಬ್ದಾರಿ ಹೇಳಿಕೆಯಿಂದ ನನ್ಗೆ ಮಾನ ಹಾನಿಯಾಗಿದೆ ಅಂತಾ ಅರ್ಜಿಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಅವರ ತವರು ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ಸೀನಿಯರ್ ಸಿವಿಲ್ ಜೆಡ್ಜ್ ಹಾಗೂ ಜೆಎಂಎಫ್ ಸಿ ಕೋರ್ಟ್ ನಲ್ಲಿ 204 ಕೋಟಿ ರೂಪಾಯಿ ಮಾನನಷ್ಟ ಸಿವಿಯಲ್ ಮೊಕದ್ದಮೆ ಅರ್ಜಿಯನ್ನ ಸಲ್ಲಿಸಿದ್ದಾರೆ.