ಯೋಗೇಶಗೌಡ ಕೊಲೆ ಕೇಸ್: ಹಲವರಿಗೆ ಸಿಬಿಐ ಡ್ರಿಲ್

260

ಪ್ರಜಾಸ್ತ್ರ ಸುದ್ದಿ

ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶಗೌಡ ಕೊಲೆ ಪ್ರಕರಣ ಸಂಬಂಧ ಗುರುವಾರ ಬೆಳಗ್ಗೆ, ಮಾಜಿ ಸಚಿವ ವಿನಯ ಕುಲ್ಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡರನ್ನ ಗದಗನಲ್ಲಿ ಬಂಧಿಸಲಾಗಿದೆ. ಇದರ ನಡುವೆ ಕೆಲವರ ವಿಚಾರಣೆಯನ್ನ ಸಹ ಸಿಬಿಐ ನಡೆಸಿದೆ.

ಈಗಾಗ್ಲೇ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ ಕುಲ್ಕರ್ಣಿ ಆಪ್ತ ಬಸವರಾಜ ಮುತ್ತಗಿ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ಯೋಗೇಶಗೌಡ ಪತ್ನಿ ಮಲ್ಲಮ್ಮ ಗೌಡರನ್ನ ಧಾರವಾಡ ಉಪ ನಗರ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ.

ಮೊದಲು ಪ್ರತ್ಯೇಕವಾಗಿ ಎಲ್ಲರ ವಿಚಾರಣೆ ನಡೆಸಲಾಗಿದೆ. ಬಳಿಕ ಎಲ್ಲರನ್ನ ಒಟ್ಟಿಗೆ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೂ ಮೊದ್ಲು ಹಲವು ಬಾರಿ ಇವರೆಲ್ಲ ಸಿಬಿಐ ವಿಚಾರಣೆ ಎದುರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!