ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ ರಜನಿಕಾಂತ್ ಹಾಗೂ ಖ್ಯಾತ ಉದ್ಯಮಿ ವಿಶಾಖನ್ ವನಗಮುಡಿ ಅವರ ವಿವಾದ ಚೆನ್ನೈನ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆಯಿತು.
ಅವರಿಬ್ಬರು ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದರು. ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ನಟ ಕಮಲ್ ಹಾಸನ್ ಮದುವೆಗೆ ಆಗಮಿಸಿ ನವದಂಪತಿಗಳಿಗೆ ಆಶೀರ್ವದಿಸಿದರು.
ಶುಕ್ರವಾರವಷ್ಟೇ ಸೌಂದರ್ಯ ಅವರ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮವಿತ್ತು. ಕಾರ್ಯಕ್ರಮದಲ್ಲಿ ರಜಿನಿಕಾಂತ್ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಸ್ವತಃ ರಜನೀಕಾಂತ್ ಅವರೇ ಕಾರ್ಯಕ್ರಮದ ಫೋಟೊವನ್ನು ಟ್ವಿಟರ್ ಖಾತೆಯಲ್ಲಿ ಅಪಲೋಡ್ ಮಾಡಿ, “ನನ್ನ ಜೀವನದ ಮುಖ್ಯ ಪುರುಷರು” ಎಂದು ಟ್ವೀಟ್ ಮಾಡಿದ್ದರು.