ಕೊಳವೆಬಾವಿಗೆ ಬಿದ್ದ ಮಗು: ಭರದಿಂದ ಸಾಗಿದ ರಕ್ಷಣಾ ಕಾರ್ಯ

576

ತಿರುಚರಪಳ್ಳಿ: ತಮಿಳುನಾಡಿನ ತಿರುಚರಪಳ್ಳಿಯ ನದುಕುಟ್ಟುಪಟ್ಟಿಯಲ್ಲಿ ಎರಡು ವರ್ಷದ ಮಗು ಕೊಳವೆ ಬಾವಿಗೆ ಬಿದ್ದಿದೆ. ಶುಕ್ರವಾರ ಸಂಜೆ 2 ವರ್ಷದ ಸುಜಿತ ವಿಲ್ಸನ್ ಅನ್ನೋ ಮಗು ಬಿದ್ದಿದೆ. 25 ಅಡಿ ಆಳಕ್ಕೆ ಬಿದ್ದಿರುವ ಮಗುವಿನ ರಕ್ಷಣೆ ಭರದಿಂದ ಸಾಗಿದೆ.

ಕಳೆದ 15 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗ್ತಿದೆ. 10 ಅಡಿ ಆಳದಲ್ಲಿ ಬಂಡೆ ಎದುರಾದ ಪರಿಣಾಮ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಆರೋಗ್ಯ ಸಚಿವ ವಿಜಯಭಾಸ್ಕರ್, ಪ್ರವಾಸೋದ್ಯಮ ಸಚಿವ ಮಲ್ಲಮಂಡಿ ನಟರಾಜನ್, ಅಲ್ಪಸಂಖ್ಯಾತ ಮತ್ತು ಕಲ್ಯಾಣ ಸಚಿವ ಮಲಮತಿ ಸ್ಥಳದಲ್ಲಿಯೇ ಇದ್ದಾರೆ.

ಸುಜಿತ ರಕ್ಷಣೆಗೆ ಕೈಲಾದ ಸಹಾಯ ಮಾಡಲಾಗ್ತಿದ್ದು, ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ಮಗು ಆದಷ್ಟು ಬೇಗ ಸುರಕ್ಷಿತವಾಗಿ ಬರಲಿ ಎಂದು ಪ್ರತಿಯೊಬ್ಬರು ದೇವರಲ್ಲಿ ಬೇಡಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!