ಪ್ರಜಾಸ್ತ್ರ ಸುದ್ದಿ
ನವದೆಹಲಿ: ಬುಧವಾರ ಸಂಜೆ 43 ಜನರು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಹೀಗಾಗಿ 12 ಜನರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಡಿ.ವಿ ಸದಾನಂದಗೌಡ, ರವಿಶಂಕರ ಪ್ರಸಾದ, ಪ್ರಕಾಶ ಜಾವ್ಡೇಕರ್, ಹರ್ಷವರ್ಧನ, ಥಾವರ್ ಚಂದ್ ಗೆಹ್ಲೋಟ್, ರಮೇಶ ಪೋಖ್ರಿಯಾಲ್, ಸಂತೋಷಕುಮಾರ ಗಂಗ್ವಾರ, ಬಾಬುಲ ಸುಪ್ರಿಯೋ, ಧೋತ್ರೆ ಸಂಜಯ ಶಮರಾಮ, ರಿಟಾನ್ ಲಾಲ್ ಕಟಾರಿಯಾ, ಪ್ರತಾಪ ಚಂದ್ರ ಸಾರಂಗಿ, ದೇಬಶ್ರೀ ಚೌಧುರಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
6 ಜನ ಕ್ಯಾಬಿನೆಟ್ ಸಚಿವರು, 5 ಜನ ರಾಜ್ಯ ಖಾತೆ ಸಚಿವರು ಹಾಗೂ 1 ಸ್ವತಂತ್ರ ನಿರ್ವಹಣೆ ಖಾತೆ ಸಚಿವರು ಸೇರಿದಂತೆ 12 ಜನರು ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಜೀನಾಮೆವನ್ನ ಅಂಗೀಕರಿಸಿದ್ದಾರೆ.