ಮಗುವಿನ ಸಾವಲ್ಲೂ ಕುಟುಂಬದ ಸಾರ್ಥಕತೆ

176

ಪ್ರಜಾಸ್ತ್ರ ಸುದ್ದಿ

ರಾಯಚೂರು: ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 14 ತಿಂಗಳ ಮಗುವಿನ ಸಾವಿನಲ್ಲೂ ಕುಟುಂಬಸ್ಥರು ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದೆ. ಈ ಮೂಲಕ ಹಲವರಿಗೆ ಬೆಳಕಾಗಿದ್ದಾರೆ. ಜಿಲ್ಲೆಯ ಗೆಜ್ಜಲಗಟ್ಟಾ ಗ್ರಾಮದ ಅಮರೇಗೌಡ ಕಾಮರೆಡ್ಡಿ ಹಾಗೂ ವಾಣಿ ದಂಪತಿ ನೋವಿನಲ್ಲೂ ಮಾನವೀಯತೆ ತೋರಿದ್ದಾರೆ.

ಇವರ ಮಗು ಬಸವಪ್ರಭು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬೆಂಗಳೂರು, ಬೆಳಗಾವಿ, ರಾಯಚೂರು ಸೇರಿ ಅನೇಕ ಕಡೆ ತೋರಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.

ಈ ಕುರಿತು ಮಾತನಾಡಿರುವ ದಂಪತಿ ಮೊದಲ ಮಗುವನ್ನು ಸಹ ಕಳೆದುಕೊಂಡಿದೆ. ಬಸವಪ್ರಭು ಮೂರನೇ ಮಗುವಾಗಿದ್ದು, ಅವನನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ. ಇದರ ನಡುವೆ ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿಗೆ ನೇತ್ರದಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!