ಪ್ರಜಾಸ್ತ್ರ ಸುದ್ದಿ
ಹಾಸನ: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 4ನೇ ದಿನವೂ ಮುಂದುವರೆಯಿತು. ಇದರ ಪರಿಣಾಮ ಸಾರ್ವಜನಿಕರ ಪರದಾಟವೂ ಮುಂದುವರೆದಿದೆ. ಇದರ ನಡುವೆ ಹಾಸನದಲ್ಲಿ 150 ಜನ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಈ ಮೂಲಕ ಅಧಿಕಾರಿಗಳು ಮನವೊಲಿಸುವಲ್ಲಿ ಒಂದಿಷ್ಟು ಯಶ್ವಿಯಾಗಿದ್ದಾರೆ.
50 ಜನ ಡ್ರೈವರ್ಸ್, ಕಂಡಕ್ಟರ್ಸ್ ಹಾಗೂ 86 ಜನ ಮೆಕ್ಯಾನಿಕ್ ಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಹೊಸ ಬಸ್ ನಿಲ್ದಾಣ ಹಾಗೂ ಎನ್.ಆರ್ ವೃತ್ತದಿಂದ ಹೊರ ಜಿಲ್ಲೆ ಹಾಗೂ ವಿವಿಧ ತಾಲೂಕುಗಳು ಸಂಜೆ 30 ಬಸ್ ಸಂಚರಿಸಿವೆ.