ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 2ನೇ ದಿನವೂ ಮುಂದುವರೆದಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಂಬಳ ಹೆಚ್ಚಿಗೆ ಮಾಡಲಾಗುವುದು, ಮಾತುಕತೆಗೆ ಬನ್ನಿ ಎಂದು ಬುಧವಾರ ಹೇಳಿದ್ದಾರೆ. ಆದ್ರೆ, ಇದಕ್ಕೆ ಸಾರಿಗೆ ನೌಕರರು ಸಿದ್ಧರಾಗಿಲ್ಲ.
ಬಸ್ ಬಂದ್ ನಿಂದಾಗಿ ಜನರ ಓಡಾಟ ಕಡಿಮೆಯಾಗಿದೆ. ಬುಧವಾರ ಖಾಸಗಿ ಬಸ್ ಗಳ ವಸೂಲಿಯಿಂದ ಹೈರಾಣಾಗಿರುವ ಜನತೆ ಇಂದು ಅಷ್ಟೊಂದು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ದಿನದ ಆದಾಯಕ್ಕಿಂತ ಬಸ್ ದರವೇ ಹೆಚ್ಚಿಗೆಯಾದರೆ ಎಲ್ಲಿಂದ ಕೊಡುವುದು ಎಂದು ಮನೆಯಲ್ಲಿಯೇ ಉಳಿಯುತ್ತಿದ್ದಾರೆ.