ಪ್ರಜಾಸ್ತ್ರ ಸುದ್ದಿ
ಸಿಂದಗಿ: ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಹರಾದ ರೈತ ಫಲಾನುಭವಿಗಳನ್ನು ಹಾಲಿ ಶಾಸಕರು ರದ್ದುಗೊಳಿಸಿ ಹೊಸ ಫಲಾನುಭವಿಗಳನ್ನು ಮರು ಆಯ್ಕೆ ಮಾಡಲು ಜಲಸಂಪನ್ಮೂಲ ಸಚಿವರಿಗೆ ಶಿಫಾರಸು ಮಾಡಿದ್ದಾರೆಂದು ಹೇಳಿ ನಾಳೆ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ.
ಮಾರ್ಚ್ 5, ಮಂಗಳವಾರ ರಾಂಪೂರ ಕ್ಯಾಂಪಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮಾಜಿ ಶಾಸಕರು, ಮಂಡಲ ಅಧ್ಯಕ್ಷರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.