ಪಕ್ಷಕ್ಕೆ ಮುಜುಗರ ಆಗಬಾರದೆಂದು ಸುಮ್ಮನಿದ್ದೇನೆ: ಕುಮಟಳ್ಳಿ

339

ಬೆಂಗಳೂರು: 10 ಜನ ವಲಸೆ ಶಾಸಕರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಿದ್ದು, ಅವರ ಜೊತೆಗೆ ಗುರುತಿಸಿಕೊಂಡಿರುವ ಶಾಸಕ ಮಹೇಶ ಕುಮಟಳ್ಳಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿಲ್ಲ. ಇದ್ರಿಂದ ಅಸಮಾಧಾನ ಇರುವುದು ಸತ್ಯ ಮತ್ತು ಪಕ್ಷದ ನಿರ್ಧಾರದಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.

ಸಚಿವ ಸ್ಥಾನ ಸಿಗದಿದ್ರೂ ಪರ್ಯಾಯ ಅಧಿಕಾರ ನೀಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ಸಧ್ಯಕ್ಕೆ ಟೆನ್ಷನ್ ಇಲ್ಲವೆಂದು ಶಾಸಕರು ಹೇಳಿದ್ದಾರೆ. ಹಲವಾರು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಗೌರವಯುತ ಸ್ಥಾನ ಸಿಕ್ರೆ ಸಂತೋಷವಾಗುತ್ತೆ. ಬಿಜೆಪಿಗೆ ಮುಜುಗರವಾಗರದೆಂದು ಸುಮ್ಮನಿದ್ದೇನೆ. ಅಸಮಾಧಾನ ಇದೆಯೋ ಇಲ್ವೋ.. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಅಂತಾ ಶಾಸಕ ಮಹೇಶ ಕುಮಟಳ್ಳಿ ಬಹಳ ಬೇಸರಿಂದಲೇ ಈ ಮಾತುಗಳನ್ನ ಆಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!