ಬೆಂಗಳೂರು: ಉಪ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗದಿರುವುದಕ್ಕೆ ಬೇಸರವಿಲ್ಲವೆಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಆದ್ರೆ, ಮುಂದಿನ ಭವಿಷ್ಯ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅಭ್ಯರ್ಥಿಗಳ ಪರ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಅಂತಾ ಹೇಳುತ್ತೇನೆ ಅಂತಾ ಹೇಳಿದ್ರು.
ಅಥಣಿ ಟಿಕೆಟ್ ಆಕಾಂಕ್ಷೆಯಾಗಿದ್ದು ನಿಜ. ಟಿಕೆಟ್ ಕೊಡಿ ಎಂದು ಹೈಕಮಾಂಡ್ ಗೆ ಹೇಳಿದ್ದೆ. ಆದ್ರೆ, ಮಹೇಶ ಕುಮಟಳ್ಳಿಗೆ ನೀಡಲಾಗಿದೆ. ವೈಯಕ್ತಿಕ ಹಿತಾಸಕ್ತಿ ಮುಖ್ಯವಲ್ಲ. ಪಕ್ಷದ ಗೆಲುವು ಮುಖ್ಯವೆಂದು ಹೇಳಿದ್ರು. ಅಲ್ದೇ, ನಾನು ಕುಮಟಳ್ಳಿಗೆ ಟಿಕೆಟ್ ನೀಡಬಾರದಂದು ಎಲ್ಲಿಯೂ ಹೇಳಿಲ್ಲಂತ ಹೇಳಿದ್ರು. ಡಿಸಿಎಂ ಲಕ್ಷ್ಮಣ ಸವದಿ ಹೀಗೆ ಹೇಳಿರುವುದ್ರಿಂದ ಬೆಳಗಾವಿಯ ರಾಜಕೀಯದಲ್ಲಿ ಒಂದಿಷ್ಟು ಮುನಿಸು ಕಡಿಮೆಯಾಗಬಹುದು.