ಪ್ರಜಾಸ್ತ್ರ ಸುದ್ದಿ
ಹಾವೇರಿ: ಹೊಸ ವರ್ಷದ ಪಾರ್ಟಿ ಮಾಡಲು ಹೋದ ಮೂವರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ಮೂರು ದಿನಗಳ ಬಳಿಕ ಯುವಕ ಶವ ಪತ್ತೆಯಾಗಿವೆ. ರಾಣೆಬೆನ್ನೂರು ತಾಲೂಕಿನ ಮುದೇನೂರು ನದಿಯ ಪಂಪ್ ಹೌಸ್ ಹತ್ತಿರ ಪಾರ್ಟಿಗೆ ಹೋದವರು ಮೃತಪಟ್ಟಿದ್ದಾರೆ.
ಸತತ 48 ಗಂಟೆಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಇಂದು ಹೊರ ತೆಗೆದಿದ್ದಾರೆ. ಮುದೇನೂರ ಗ್ರಾಮದ ನವೀನ್ ಕುರಗಂದ(20), ವಿಕಾಸ್ ಪಾಟೀಲ(20) ಹಾಗೂ ನೇಪಾಳ ಮೂಲದ ಪ್ರೇಮ್ ಬೋರಾ(25) ಮೃತ ದುರ್ದೈವಿಗಳು.
ಯುವಕರ ಮೃತ ದೇಹಗಳನ್ನು ಹೊರ ತೆಗೆಯುತ್ತಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಈ ಬಗ್ಗೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.